Monday, July 22, 2013

ನೀ ಸನಿಹಕೆ ಬಂದರೆ ಹ್ರದಯದ ಕತೆ ಏನು ...

ಮತ್ತದೆ ನೆನಪುಗಳು ಗೆಳತಿ ... ಆ ಸುಂದರ ರಾತ್ರಿಯ ಮೆಲಕು ಮನಸಿನ ಕೋಲಿ ಕೊಲಿಗಳಲಿ .... ನಿನ್ನ ಸುಂದರತೆಯನ್ನು ಗಮನಿಸಿದ್ದೆ ಅಂದಿರಬೇಕು ನಾನು ... ನಿನ್ನ ಮನಸಿನ ಸವಿಯಲ್ಲಿ ಕಳೆದು ಹೋಗಿದ್ದ ನಾನು...

ಅದು ಸ್ವಚ್ಚಂದ ಬೆಳದಿಂಗಳ ರಾತ್ರಿ.. ಮೊಡವಿಲ್ಲದ ಆಗಸ..ತಂಪು ಗಾಳಿಯ ಸೋನೆ .... ನಿನ್ನ ಕಾಲಿನ ಮೇಲೆ ಮಲಗಿದ್ದ ನಾನು ನಿನ್ನ ಮುಕವನ್ನೇ ನೋಡುತ್ತಿದ್ದೆ..
ನಿನ್ನ ಮುಂಗುರುಳು ಗಾಳಿಯ ಮೋಡಿಗೆ ಕೀನೆ ಸವರುತ್ತಿತ್ತು .. ತುಟಿಯ ಮೇಲದೆ ಮುಗುಳ್ನಗು ..
ಅದೆಂತ ಆಕರ್ಷಣೆ.. ನನ್ನ ಕೈಗಳು ನಿನ್ನ ಸೊಂಟವ ಬಳಸಿ ಕನವರಿಕೆಯ ಮಡಿಲಲ್ಲಿ ತೇಲುವಂತೆ ಮಾಡುತಿತ್ತು .. ನೀನೇನು ಯೋಚಿಸುತ್ತಿರಬಹುದು ಎಂದು ನಾ ಯೋಚಿಸುತ್ತಿದ್ದೆ ... ನಿನ್ನ ಮಡಿಲಿನ ಸುಖ ... ನಿನ್ನ ಸ್ಪರ್ಶದ ಮೋಡಿ ನನ್ನನ್ನು ಇನ್ನು ಆಳದ ಉನ್ಮಾದತೆಗೆ ತಳ್ಳುತ್ತಿತ್ತು..
ನಿನ್ನ ಪುಟ್ಟ ಪುಟ್ಟ ಕೈ ಬೆರಳುಗಳ ಜೊತೆ ನಾ ಆಟವಾದುತ್ತಿದ್ದೆ.. ನಿನ್ನ ಮುಕವೋ ಕೆಂಪು ಕೆಂಪು.. ನಾಚಿಕೆಯಿಂದಲಾ?!.. ಪುರುಷ ಸ್ಪರ್ಶದಿಂದಲಾ..? ಹೆಣ್ಣಿನ ಮನಸ್ಸು ಅರಿಯುವುದು ಇದಕ್ಕೆ ಕಷ್ಟವೇನೋ ?! ನಾವು ಜಗಳ ಆಡಿದ ದಿನದಲ್ಲೂ ನಿ ಕೆಂಪು ಕೆಂಪು .. ಸರಸವಾಡಿದಾಗಲು ... ಅಷ್ಟೇ .. ನೀ ನನ್ನ ಎದೆಯಲ್ಲಿ ಮುಖ ಇಟ್ಟೆ.. ನನಗೆ ತಿಳಿಯದೆ ನನ್ನ ಕೈಗಳು ನಿನ್ನ ಬಳಸಿ ಲಲ್ಲೆಗರೆದಿದ್ದವು..

ಇ ಸಮ್ಮೋಹನದ ಹಿತದ ಅಂಚಿನಲ್ಲೇ ನನ್ನ ಸಾವಾದರೆ ಎಂದೆನಿಸುತ್ತಿತ್ತು ನನಗೆ .. ನಿನ್ನ ಬಿಸಿಉಸಿರು ನನ್ನ ಎದೆಯಲ್ಲಿ ಹೊಸತನ ತರುತ್ತಿತ್ತು.. ಸನಿಹ ಮುಂಗಾರಿನ ಮಿಂಚಿನ ಜಲಕ್ ಹುಟ್ಟಿಸುತ್ತಿತ್ತು ...

ನಾ ಕನಸಲ್ಲಿ ಕಳೆದುಹೋಗಿದ್ದೆ .. ನನ್ನ ತುಟಿಯನ್ನು ನಿ ಮ್ರದುವಾಗಿ ಕಚ್ಹುವವರೆಗೆ .. ಮಂದ್ರ ತುಟಿಗಳ ಮಿಲನ..
ಕಣ್ಣು ಅರೆ ಮುಚ್ಚಿತ್ತು ... ಚಂದ್ರ ಕೂಡ ನಾಚಿಕೆಯಿಂದ ಮೋಡದ ಹಿಂದೆ ಸರಿದು ನಮಗೆ ಕತ್ತಲೆಯ ಅಬಯ ಹಸ್ತ
ನೀಡಿದ ...

ನಿ ನನಗೆನನ್ನು ಕೊಟ್ಟೆ ? ನಾ ಏನನ್ನು ಪಡೆದುಕೊಂಡೆ ..?
ಗೊತ್ತಿಲ್ಲ .. ಕಳೆದು ಹೋದೆ ನಿನ್ನಲಿ .. ನಿನ್ನ ಕೈಗಳು ನನ್ನ ಬೆನ್ನ ಸುತ್ತ ಅಲೆಯುತ್ತಿದ್ದರೆ ತುಟಿಗಳ ಸೋಲಿಸುವ ಹುಮ್ಮಸ್ಸಿನಲ್ಲಿ ನಾ ಸೋತಿದ್ದೆ ..... ಎರಡು ಸಮುದ್ರಗಳು ಸೇರುವ ಜಾಗ.. ಯಾರು ಸೋಲರು ... ಯಾರು ಗೆಲ್ಲರು ...
ನಿರಂತರ ಯುದ್ದ ... ನಿರಂತರ ಬಾವ ಪರವಶತೆ ..... ಪರವಶವೇ ನಮ್ಮಿ ಜೀವನ ಅರ್ಥವಾಗುತ್ತಿತ್ತು..

ತುಂಬಾ ಹೊತ್ತಿನ ಅಗಾದ ಕನವರಿಕೆಯ ನಂತರ ನಿನ್ನ ಮುಕದ ಮೇಲೆ ಸಂತ್ರಪ್ತಿ ... ನಿನ್ನ ಮೈ ಮೇಲಿನ ಬೆವರಿನ ಸಾಲುಗಳನ್ನು ನಾ ನನ್ನ ಮಹಾಶ್ವೇತೆಯಲಿ ಅರಗಿಸಿಕೊಂಡೆ.. ನಿನ್ನ ಹಣೆಯ ಮೇಲೊಂದು ಮುತ್ತಿಟ್ಟೆ ..

ಕಾಲವು ವರ್ಶಿಸುತ್ತಿತ್ತು.. ನಿಸರ್ಗವು ಸುಭಾಶಿಸುತ್ತಿತ್ತು..
ಇಗ ನನ್ನ ಮಡಿಲಿನಲ್ಲಿ ನಿ....

.. ಮತ್ತದೆ ಮುಗ್ದ ನಗು..

ಮತ್ತದೆ ಮುಗುಳ್ನಗು.. ನೀ ಹಾಗೆಯೆ ನಿದ್ದೆ ಹೋದೆ..
ನಿನ್ನ ಕನಸಿನಲಿ ಬರಲು ನಾನು ಇರುಳಿನಲಿ ಜಾರಿ ಹೋದೆ

ಅನುರಾಗದ ಅಲೆಯಲ್ಲಿ



ಅರಳುತಿದೆ ಪ್ರಿತೀಯ ಸಂವೇದನೆ ಮನದಾಳದಲ್ಲಿ , ನುಡಿಯುತಿದೆ ಪ್ರೇಮದ ಸಂವಹನ ಕನಸಿನಾಳದಲಿ 
ಕನವರಿಸುತಿದೆ ಸ್ನೇಹದ ಸಿಂಚನ ತೆರೆಯ ಮರೆಯಲಿ , ನಿನ್ನ ನೋಡದೇನೆ , ನಿನ್ನ ಕಾಣದೇನೆ 
ಕರಗಿ ಹೋಗುತಿದೆ ನನ್ನ ಮನಸಿನ ಕಣಕಣಗಳು ನಿನಗಾಗಿ ಗೆಳತಿ 

ನಿನ್ನ ಸಮ್ಮೋಹನದ ಮಾತಿನ ಸೆಳೆತಕೆ 

ಮನಸಿಂದ ಮನಸಿಗಾಗಿ 
ಗೆಳೆಯನಿಂದ ಗೆಳತಿಗಾಗಿ 
ಪ್ರೀತಿಯಿಂದ ಪ್ರೀತಿಗಾಗಿ

ಇದು ಪ್ರೀತಿಯ ಪ್ರಜಾಪ್ರಬುತ್ವ

ಕಣ್ಣಿರಾಗದ ದುಃಖದ ನಡುವಿನ ಸಂತೋಷ ( To be continued ............)

ಮನಸ್ಸು ಬಿರಿದಿಟ್ಟ ಹಲಸಿನ ಹಣ್ಣಿನಂತಾಗಿತ್ತು . ಅಲ್ಲಲ್ಲಿ ಕೊಳೆತು ನಾರುತ್ತಿತ್ತು . ಚಿಕ್ಕ ಚಿಕ್ಕ ಬಿಳಿ ಹುಳುಗಳು ಆ ಕಡೆ , ಇ ಕಡೆ ಹರಿಯುತ್ತಿರುವ ಬಾವನೆ. ಮನಸ್ಸಿನ ಹುಳಗಳು . ಜೇಡು ಹೊಡೆಯದ ಮನೆಯ ಗೋಡೆಯ ಮೇಲೆ ಕುಳಿತು ದೂಳಿನ ಜೊತೆ ಸಹವಾಸ ಮಾಡಿದ ಹಲ್ಲಿಯಂತೆ ಕಂಡು ಬಂದೆ ನನಗೆ ನಾನೆ. ವಾಕರಿಕೆ ಬಂತು . ಬೆಂಗಳೂರು .. ಬೆಂಗಳೂರಿನ ಹೊಲಸು ಹೇಸಿಗೆಯ ಸುಖದ ರಾತ್ರಿಗಳು . ಅಬ್ಬಾ !! ಮೈ ಒಳಗಿನ ಪ್ರತಿ ರೋಮಗಳು ನೀತಿ ಕಳೆದುಕೊಂಡು , ಸುಬದ್ರವಾದ ಅಬಧ್ರದ ಸ್ತಿತಿಯಲ್ಲಿ ಸಿಲುಕಿ ತಮ್ಮನ್ನು ತಾವೇ ಹಳಿದುಕೊಂಡು ಪಕ್ಕದ ರೋಮಕ್ಕೆ ತಿಳಿದುಹೋದರೆ ಎಂದು ಅಲುಗಾಡದೆ ಮಲಗಿ ಬಿಟ್ಟಿದ್ದವು ತಮ್ಮ ಮುಲುಗುವಿಕೆ ಮುಗಿಸಿ ..

ಅವಳು ಕೂಗುತ್ತಲೇ ಇದ್ದಳು . ಮುಲುಗುವಿಕೆ . ಹಾದರದ ಹೊಸ್ತಿಲಲ್ಲಿ . ಕನ್ನಡವೂ ಅಲ್ಲ. ಸ್ವಚ್ಛ ಕನ್ನಡ ಬರುವುದಿಲ್ಲವೆನೋ?? ಆಂಗ್ಲವೂ ಅಲ್ಲ . ನನಗೆ ತಿಳಿಯುವುದಿಲ್ಲ ಎಂಬ ಬಯವೇನೋ !!? ಕಂಗ್ಲಿಷ್ನಲ್ಲಿ ಸಹಕರಿಸುತ್ತಲೇ , ತನ್ನ ಬೆತ್ತಲಾದ ಎದೆಯ ಕಣಿವೆಯಲ್ಲಿ ನನ್ನ ಬೊಗಸೆ ಮುಖವನ್ನು ಮುಚ್ಚಿಟ್ಟು, ತಲೆಯಲ್ಲಿ ಕೈ ಆಡಿಸಿ , ಎದೆ ಕೂದಲನ್ನು ನೇವರಿಸಿ , ತುಟಿಗಳನ್ನು ಸಮರ್ಪಿಸಿ ಮತ್ತು ಮತ್ತು ಗಾಡವಾಗಿ ಆಲಂಗಿಸುತ್ತಿದ್ದರೆ, ದೇಹ
ಸಹಕರಿಸಲೇ ಬೇಕಾಗಿತ್ತು . ಸಹಕರಿಸುತ್ತಿತ್ತು . ಉದ್ವೆಗಗೊಳ್ಳುತ್ತಿದ್ದಳು, ಹತೋಟಿ ತಪ್ಪಿದ ವಾಹನದಂತೆ ಚಲಿಸುತ್ತಿದ್ದಳು . ಮೈ ಬೆವರು ಬೆವರು .. ಸುಗಂದವೋ? ದುರ್ನಾತವೋ !? ವಿಚಿತ್ರವಾದರೂ ಸತ್ಯ . ಇವಳ್ಯಾರು? ನಾನ್ಯಾರು ? ತಾಸುಗಳ ನಿಮಿಷಗಳ ಪರಿಚಯ ಸಾಕಾ?? ದೇಹಗಳು ಕಾದ ಕುಲುಮೆಗಳಾಗಿ, ಎಲ್ಲವನ್ನು ಕಳೆದುಕೊಂಡು , ಬಂಜರಾಗಿ , ಮುಡುಗಿಹೋದ ಐಶಾರಾಮಿ ಹಾಸಿಗೆಯ ಕಮರಿ ಹೋದ ಸ್ವಪ್ನಗಳಾಗಲು..? ಎಂಜಲು ಬಾಳೆ, ನೆಕ್ಕುತ್ತಿರುವ ನಾಯಿ . ಗಂಡನೆಲ್ಲೋ ಇವಳಿಗಾಗಿ ಮುಂಬರುವ ಮಕ್ಕಳಿಗಾಗಿ ಸತ್ತು ಸುಣ್ಣವಾಗುತ್ತಿರುವ ಕಪ್ಪು ರಾತ್ರಿಯಲ್ಲಿ , ಇನ್ಯಾರದೋ ಬಾಹು ಬಂದನದಲ್ಲಿ, ಮದುರ ಚುಂಬನದಲ್ಲಿ , ಸುಖದ ತುತ್ತ ತುದಿಯ ನಶೆಯಲ್ಲಿ , ಎಲ್ಲವನ್ನೂ ಕೊಟ್ಟು , ತನ್ನತನವ ಬಿಟ್ಟು ಕಾಮದ ಕೆನ್ನಾಲಿಗೆಯಲ್ಲಿ ಮಲಗೆದ್ದವಳ ಮೋಹಕತೆಗೆ ಸತ್ತು ಬಂದ ಗಂಡ ಎಂಬ ಗಂಡು ಪ್ರಾಣಿ, ನರಸತ್ತ , ನಿರರ್ಥಕ ಹರದಾರಿ ನಡೆದಂತೆ , ಹಗಲಿನ ಬಂಡ ಹಸಿವನ್ನು ತೀರಿಸಿಕೊಂಡು , ಆಕೆಯ ಕಡೆ ಲಕ್ಷ್ಯ ಕೊಡದೆ ಪಕ್ಕ ಸರಿದು ನಿದ್ರೆ ಹೋದ ಎಷ್ಟೋ ಕ್ಷಣಗಳ ನಂತರದ ಆಕೆಯ ಕಂಬನಿಯೇ ಈಗ ನನ್ನ ಮೇಲೆ ಬೆವರಾಗಿ ಹರಿಯುತ್ತಿದೆ ಎನ್ನಿಸಿತು.

ಯಾರ ಮೇಲಿನ ಸಿಟ್ಟೋ ? ದುಃಖವೋ ? ಆಂತರ್ಯದಲ್ಲಿ ಕಟ್ಟಿಟ್ಟುಕೊಂಡ ಬಾವನೆಗಳ ಜಲಾಶಯದ ಕಟ್ಟೆ ಒಡೆದಂತೆ .. ಹಲವಾರು ತಾಸು ಮಳೆಯ ನಂತರದ ಕುಮಾರದಾರೆಯಂತೆ .. ಮುನ್ನುಗ್ಗುತ್ತಲೇ ಇದ್ದಳು . ನನಗಿವೆಲ್ಲ ಹೊಸತು . ದೇಹವು ಪಳಗಿಲ್ಲ . ತಿಳಿದಂತಿತ್ತು ಆಕೆಗೂ . ಕಣ್ಣಲ್ಲಿ ಅದೇನೋ ಕಾಂತಿ . ಮೈಲಿ ಅದೇನೋ ಹೊಳಪು . ಗುರುವಾದಳು ಶಿಷ್ಯನಾದೆ . ಪಾತ್ರದ ಪರಿಚಯವಿಲ್ಲ . ಬೇರೆ ಪಾತ್ರಧಾರಿಗಳಿಲ್ಲ. ಹಾಸಿಗೆಯೆ ರಂಗ ಮಂಟಪ . ಕಾಮರಾಜಮಾರ್ಗ ನಾಟಕ . ಬಣ್ಣ , ವೇಷ ಬುಶಣಗಳ ಅವಶ್ಯಕತೆಯಿಲ್ಲ . ನಿರಾಬರಣವೆ ಸುಂದರ . ದೇವರು ಕಡೆದ ಕಲಾಕ್ರತಿ . ಸಣ್ಣನೆ ಸೊಂಟ , ಉದ್ರೆಕಕ್ಕೆ ಕನ್ನಡಿ ಹಿಡಿಯುವಂಥ ಸ್ವಜನ , ಸುಜಲ ಸುಕೋಮಲ ಕುಚದ್ವಯಗಳು. ನೀಳ ಮಟ್ಟಸ ಹೊಟ್ಟೆಯ ಇಳಿಜಾರು .

ನಾನೇನು ಸುಂದರನಲ್ಲ . ಕುರುಪಿಯಂತೆ ಕಾಣಲು ಇಲ್ಲ ಅವಳಿಗೆ . ಉಸಿರಾಟದ ವೇದಿಕೆಗೆ ಮುಲುಗುವಿಕೆಯ ಸಂಗೀತ, ನಾನು ಬರಿದಾಗಿ ಬಂಡತನದಿ ಅವಳ ಎದೆ ಕಚ್ಚಿ ಮಲಗುವವರೆಗೂ ಕೇಳುತ್ತಲೇ ಇತ್ತು . ರಾತ್ರಿ ಅದು ನಿಂತಿದ್ದು ನಾನು ಬಿರುಸಾಗುವವರೆಗೂ ಮಾತ್ರ. ಸೂರ್ಯನ ಬೆಳಕು ಕಾಣುತ್ತಲೇ ತರಾತುರಿಯಿಂದ ನನ್ನ ಎಬ್ಬಿಸಿ ಅರ್ಧ ತೆಗೆದ ಬಾಗಿಲಿನಿಂದಲೇ ನನ್ನ ಹೊರದಬ್ಬಿ " ಮತ್ತೆ ಸಿಗೋಣ " ಎನ್ನುತ್ತಾ ದಡಾರನೆ ಬಾಗಿಲು ಹಾಕಿಕೊಂಡಾಗ ಅದು ಕನಸಿನ ಮಾತು ಎಂದು ತಿಳಿದಿರುವಂತೆ ನನ್ನ ಮುಕದ ಮೇಲೊಂದು ವಿಷಾದವೋ, ವಿಪರ್ಯಾಸವೋ ತಿಳಿಯದ ನಗುವೊಂದು ಹಾಡು ಹೋಯಿತು . ಆಗಷ್ಟೇ ಹಾಲು ಹಾಕಲು ಬಂಡ ಹುಡುಗ ಇದು ತನಗೆ ಸಹಜ ಎಂಬಂತೆ ನನ್ನ ಮುಕ ನೋಡಿ ನಕ್ಕ. ತಲೆ ಬಗ್ಗಿಸಿ ನಡೆದೆ ಗೊತ್ತಿರದ ಅನಾಮಿಕ ಹಾದಿಯಲ್ಲಿ . ಕವಲು ದಾರಿಗಳು ನನ್ನ ನೋಡಿ ಬಾ ಎಂಬಂತೆ ಕೈ ಬಿಸಿದವು .

ಬೆಂಗಳೂರು ಬಂದಿಳಿದ ದಿನದಿಂದಲೂ ಊರು ಹಿಡಿಸಿದ್ದು ಅಷ್ಟಕ್ಕಷ್ಟೇ . ದೊಡ್ಡ ದೊಡ್ಡ ಕಟ್ಟಡಗಳು , ಐಶಾರಾಮಿ ಕಾರುಗಳು , ದುಡ್ಡಿನ ಹೊಳೆ ಹರಿಯದಿದ್ದವರ ಮೆಜೆಸ್ಟಿಕ್ ಬಸ್ ಸವಾರಿಗಳು , ಹುಚ್ಚು ಹಿಡಿಸುವ ಟ್ರಾಫಿಕ್ , ಬೇಡಿ ತಿನ್ನುವವರು , ಕೊಂದು ಬದುಕುವವರು . ಕಂಗಳ ಕಾಂತಿ ಕಳೆದುಕೊಂಡ ಮನುಷ್ಯರು . ಮನುಷ್ಯರಂತೆ ಕಾಣುವ ರೋಬ್ಹೊಗಳು. ಉಸಿರಾಡುವ ಆರ್ಟಿಫಿಷಿಯಲ್ ಇಂಟಲಿಜನ್ಸ ಸಾಫ್ಟ್ವೇರ್ಗಳು . ಮನುಷ್ಯನನ್ನೇ ಮರುಸ್ರಷ್ಠಿ ಮಾಡಬೇಕೆಂದು ಹೊರಟಿರುವ ದಿಗ್ಗಜರು . ಅವರಿಗೆ ಸೆಲ್ ಆಗಿ ಕುರಿಗಳಂತೆ ಬಸ್ನಲ್ಲಿ ಕುಳಿತು ಹೋಗುವ ಶ್ರೀಮಂತ ಕೂಲಿಗಳು . ಅವರನ್ನು ನೋಡಿ ಹೊಟ್ಟೆ ಕರುಳು ಕರಗಿ ಹೋಗುವಂತೆ ಕರುಬುವ ನನ್ನಂತ ಕೆಲಸವಿಲ್ಲದ , ಕೆಲಸವಿದ್ದು ಕೆಲಸ ಹುಡುಕುವ ದರಿದ್ರ ಜೀವನಗಳು ....

ನಗಬೇಕೆನ್ನಿಸಿತು ನಕ್ಕೆ ... ಆಂತರ್ಯ ?? ಬಿಕ್ಕಿ ಬಿಕ್ಕಿ ಅಳುತ್ತಿತ್ತು . ಎಲ್ಲಿದೆ ಸಂತೋಷ ? ಯಾವುದು ಸಂತೋಷ? ಯಾಕಾಗಿ ಇ ಜಂಜಾಟದ ಬದುಕುಗಳು ?? ದುಡ್ಡಿನ ಹಿಂದೆ ಓಡಿ ಹೆಣವಾಗುತ್ತಿರುವ, ಬದುಕಿದ್ದು ಶವಗಳಾಗಿರುವ ಬದುಕು ಬದುಕಾ?

ಎಷ್ಟು ಚಂದ ನನ್ನ ಹಳ್ಳಿ . ಎಷ್ಟು ಚಂದ ನಮ್ಮ ಜೀವನ . ದುಡ್ಡಿರುತ್ತೋ? ಬಿಡುತ್ತೋ ! ಖುಷಿ ? ಕಣ್ಣಿನಲ್ಲಿ ನೀರು ಚಿಮ್ಮಿದರೆ ಒರೆಸಲು ಸಂಭಂಧಗಳ ಹಸ್ತ ? ಇಲ್ಲೇನಿದೆ ? ಅಳಬೇಕಾ ? ಅತ್ತು ಸಾದಿಸುವುದೇನೂ ?? ೨೫ ವರ್ಷಗಳು ಓದಿದೆ . ವ್ಯರ್ಥ . ಇನ್ನೂ ಕೂಲಿತನ . ನಾನು ಒಬ್ಬ ಶ್ರೀಮಂತ ಕೂಲಿ . ಸ್ವಂತಿಕೆಯಿಲ್ಲದ ಪರಿಪೂರ್ಣ ಬಾಳು . ಮತ್ತೆ ಅಳಬೇಕೆನ್ನಿಸಿತು . ನಿಶ್ಯಬ್ದತೆ ತುಂಬಿದ ಒಂಟಿ ನಿಸರ್ಗ ಸಿಕ್ಕಿದ್ದರೆ , ಜಂಟಿಯಾಗಿ ಕಳೆದ ಗೆಳತಿಯ ತುಂಬು ಪ್ರೀತಿ ಕಂಡಿದ್ದರೆ , ಅಮ್ಮನ ಮಮತೆಯ ಮಡಿಲಿದ್ದರೆ ಅತ್ತು ಹಗುರಾಗುತ್ತಿದ್ದೆನೇನೋ ? ಇಲ್ಯಾವುದು ಇಲ್ಲ . ಅದ್ಯಾವುದು ಇಲ್ಲ ಎಂದು ಬಂದ ಹಲವೆ ಘಂಟೆಗಳಲ್ಲಿ ತಿಳಿದಿತ್ತು . ಅಥವಾ ನಾನು ಹಾಗೆ ತಿಲಿದುಕೊಂಡೆನೊ ?..

ಬಸ್ ಪಾಸ್ ಮಾಡಿಕೊಂಡ , ಮೆದುಳು ಸತ್ತ ಒಂಟಿ ಜೀವ ತಿರುಗದ ಗಲ್ಲಿಯಿಲ್ಲ . ಸಮಾಧಾನವಿಲ್ಲ . ಏನು ಮಾಡಬೇಕೆಂಬ ಕಚಿತ ಅಭಿಪ್ರಾಯವೂ ಇಲ್ಲ . ಸೋಲ್ಡ್ ಔಟ್ ಆಗಲು ಇಷ್ಟವಿಲ್ಲ . ಹಾಗಾಗದಿದ್ದರೆ ಇಲ್ಲಿ ಬದುಕಲು ಸಾದ್ಯವಿಲ್ಲ . ಅರ್ಥವಿಲ್ಲದ , ಅರ್ಥ ಹುಡುಕಿದರೂ ವ್ಯರ್ಥವಾಗುವ ಸಮಸ್ಯೆ ಅಲ್ಲದ ಸಮಸ್ಯಾತ್ಮಕ ಪ್ರಶ್ನೆಗಳು .ಹುಚ್ಚಾ?? ಮನಸ್ಸು ಒಪ್ಪಿಕೊಳ್ಳದು . ಅದರದೇ ಸ್ವಾರ್ಥ ಅದಕ್ಕೆ . ಗುರಿಯಿಲ್ಲದ ದಾರಿಗಳನ್ನು ಸವೆದೆ . ಏಕೆ ಹೀಗಾಗಿ ಹೋದೆ ? ಸಮಸ್ಯೆಗಳಿಲ್ಲದೆ ಇರುವುದೇ ನನ್ನ ಸಮಸ್ಯೆಯಾ? ಯೋಚಿಸುತ್ತಲೇ ಹೋದ ದಾರಿಯಲ್ಲೇ ಹಿಂತುರಿಗಿದೆ . ದಾರಿ ತಪ್ಪಿದರು ಯಾರನ್ನೂ ಕೇಳಲಿಲ್ಲ . ಎಲ್ಲಿಗೆ ಹೋಗಬೇಕೆಂಬ ನಿರ್ದಿಷ್ಟ ಜಾಗವೂ ಇರಲಿಲ್ಲ ಎನ್ನುವುದು ಸರಿಯೇ .

"ಸಮಸ್ಯೆಗಳಿಲ್ಲದ ಮನುಷ್ಯನಿಗೆ ಇಷ್ಟು ಸಮಸ್ಯೆಯಾ? ಅಣಕವಾಡಿತು ಅಂತರಂಗ . ಜಾಡಿಸಿ ಒದ್ದೆ . ಮತ್ತೆ ಮಾತಿಲ್ಲ .
ದೊಡ್ಡ ದೊಡ್ಡ ಮಹಡಿ ಕಟ್ಟಡಗಳು , ನಾನು ಕಟ್ಟಿಸುತ್ತೇನೆ . ಐಶಾರಾಮಿ ಕಾರುಗಳು ತೆಗೆದುಕೊಂಡರಾಯಿತು . ಯಾವುದು ಅಸಾದ್ಯವಿಲ್ಲ ನನಗೆ . ಅಹಂ ಬ್ರಮ್ಮಾಸ್ಮಿ ನಂಬುವವನು ನಾನು . ಹೋಟೆಲ್ ಮಾಡಿದರೆ ? ಕಂಪನಿ ತೆಗೆದರೆ ?? ಸಿನೆಮಾ ದುನಿಯಾ ಸೇರಿ ಬಿಟ್ಟರೆ ? ಕತೆ ಕವನಗಳನ್ನು ಬರೆದರಾಯಿತು . ಮನೆಗೆ ಹೋಗಿ ಬಿಟ್ಟರೆ ? ಅದೇ ಹಸಿರು , ಚಂದದ ಗಾಳಿ , ತಂಪನೆ ಮಳೆಗಾಲ , ಮನೆ , ಮನೆ ಬದಿಯ ಕೆರೆ , ಬಾಲ್ಯದ ಆಟಗಳು , ಪುಟಾಣಿ ಗೆಳೆಯರು , ಮುಸ್ಸಂಜೆಯ ಜಿರುಂಡೆಗಲು , ಅಮ್ಮನ ಕೈ ಊಟ, ಅಜ್ಜನ ವಾತ್ಸಲ್ಯ .

ಅಪ್ಪ ಮಾಡಿಟ್ಟ ಆಸ್ತಿಯಾ?? ಕುಟುಕಿತು ಅಂತರಂಗ.

ಹಾಗಲ್ಲ . ಜೀವನವಲ್ಲ ಇದು .ಯಾರು ಇಲ್ಲದ ದುಡ್ಡಿನ ಮೇಲೆ ವ್ಯಾಮೋಹದ , ಅರ್ಧ ಬೆಂದ ಅನ್ನ, ಹಲಸಿ ಹೋದ ನಿನ್ನೆ ರಾತ್ರಿಯ ಸಾಂಬಾರ್ ಜೀವನಾ? ದುಡ್ಡಿನ ಕಂತೆಗಳೇ ಜೀವನದ ಪರಿಪುರ್ಣತೆಯಾ?? ವಾರದ ಎಂಡ್ ಗಳಿಗೆ ಕಾದು ಕಾದೂ .. ನರಳಿತು . ವಿಷಾದದಲ್ಲಿ ಮನಸ್ಸು . ಬಹಳಷ್ಟು ಪ್ರಶ್ನೆಗಳು . ಉತ್ತರವಿದ್ದವಾ? ಯಾರ ಬಳಿ? ನನಗೆ ಸಮಾದಾನ ಕೊಡಬಹುದಾ ? ನಿಜವಾಗಿಯೂ ಹುಚ್ಚು ಹಿಡಿದಿತ್ತು . ಮಾನವೀಯತೆ ಮೇರೆ ಮೀರಿತ್ತು . ಕಣ್ಣು ಕಾಣದವರಿಗೆ ರಸ್ತೆ ದಾಟಿಸಿದೆ . ಏರಿನಲ್ಲಿ ನಿಂತ ತಳ್ಳುಗಾಡಿಯವನಿಗೆ ಸಹಕರಿಸಿದೆ . ಕಾರ್ ಅಡಿಗಾಗಿ ಸಾಯುತ್ತಿದ್ದ ನಾಯಿ ಮರಿಗೆ ನೀರು ಹಾಕಿದೆ . ಯಾವುದೊ ಕಟ್ಟೆಯ ಮೇಲೆ ಕುಳಿತು ಅರ್ದ ಕಪ್ ಟೀ ಕುಡಿದು , ಎರಡೆರಡು ಸಿಗರೇಟ್ ಸುಟ್ಟು ಪ್ರಪಂಚವೇ ಸಿಕ್ಕಿತು ಎಂಬ ಬಾವದಲ್ಲಿರುವ ಮುಡ ಜನರನ್ನು ನೋಡಿ ಅಳುತ್ತಾ, ನಗುತ್ತಾ ಕಳೆಯುತ್ತಿದ್ದ ದಿನಗಳಲ್ಲಿ ಸಿಕ್ಕಳವಳು . ಹಿಂದಿನ ದಿನವಷ್ಟೇ ಅನಾಮದೇಯ ಅನಾಮಿಕ ಹೆಣ್ಣಿನ ಕಾರ್ ಹತ್ತಿ ಗಂಡು ಸೂಳೆಯ ಪಾಡು ಪಟ್ಟಿದ್ದರು ಮತ್ತವಳ ಕಾರ್ ಏರಲು ಸಾಹಸ ಮಾಡಿದ್ದೆ . ನಾ ಹುಚ್ಚನಲ್ಲವೇ? ತೇಪೆ ಹಚ್ಚುತ್ತಿದ್ದೆ . ಬಿಟ್ಟಿ ಸುಕವಲ್ಲವೇ ? ಕುಗುತ್ತಲೇ ಇತ್ತು ಅಂತರಂಗ.

Sunday, June 23, 2013

ನಿನ್ನಲ್ಲೇ ಕಳೆದುಹೋದ ನನ್ನಯಾ ಎಲ್ಲೆ

ಮನಸೆಕೋ ಹಾಡಿದೆ ಈ ಹಾಡನು
ನೆನಪಿಸಿದೆ ಮಳೆನಿಂತ ಜಾಡೊಂದನು
ಮಿಂಚಿ ಮರೆಯಾದ ನಿನ್ನಯಾ ನಗು
ಕಿವಿಮುಚ್ಹೋ ಮೊದಲೇನೆ ಕೇಳುವಾ ಗುಡುಗು
ಲಾಲಾಲಾ ... ಲಾಲಾಲಾ ... ಲಾಲಾಲಾ ... ಲಾಲಾಲಾ ...

ಹಗಲಲ್ಲೊ, ಇರುಳಲ್ಲೋ ಒಮ್ಮೆ ಮುದ್ದಿಸು
ಸಾಕಾದ ಏಕಾಂತ ನೀ ತಪ್ಪಿಸು
ಅಭಿಮಂತ್ರಿಸು, ಆಮಂತ್ರಿಸು ..
ಬಯಸಿರುವಾ ತುಟಿಗಳಾ ಒಮ್ಮೆ ಚುಂಬಿಸು ..
ಲಾಲಾಲಾ ... ಲಾಲಾಲಾ ... ಲಾಲಾಲಾ ... ಲಾಲಾಲಾ ...

ನಲ್ಲೆ, ನಲ್ಲೆ ..
ನಿನ್ನಲ್ಲೇ ಕಳೆದುಹೋದ ನನ್ನಯಾ ಎಲ್ಲೆ
ನೀ ನಡೆದ ದಾರಿಯ ಸವೆಯಬಲ್ಲೆ
ನಿಟ್ಟುಸಿರ ಬಿಡಲೊಮ್ಮೆ ನಿಲ್ಲೆ ಅಲ್ಲೇ ..
ಲಾಲಾಲಾ ... ಲಾಲಾಲಾ ... ಲಾಲಾಲಾ ... ಲಾಲಾಲಾ ...

ಏಕಾಂತ ಸಾಹಿತ್ಯ ಸಾನಿಧ್ಯ ತೊರೆದು
ಸಖಿಗೀತ ಮೂಡಿಸುವೆ ನಿನ್ನ ಚಿತ್ರ ಬರೆದು
ಸ್ವಲ್ಪವೇ ಜಾರಬಹುದು, ನಿನ್ನ ಛಾಯೆಯ ಸೆರಗು
ಕೊಡು ಕೊಡುತಾ ನಿನ ಅಂದಕೆ ಇನ್ನಷ್ಟು ಮೆರಗು
ಲಾಲಾಲಾ ... ಲಾಲಾಲಾ ... ಲಾಲಾಲಾ ... ಲಾಲಾಲಾ ...


Saturday, June 22, 2013

ಕಡಲಿಗೊಂದು ತೀರಾ.. ಕಡಲಿಗೊಂದು ತೀರಾ..

ಕಡಲಿಗೊಂದು ತೀರಾ.. ಕಡಲಿಗೊಂದು ತೀರಾ..
ನೀಲಿ ಅಲೆಗಳ, ದೊಡ್ಡ ತೆರೆಗಳಾ
ತಡೆಯಲೊಂದು ತೀರಾ , ತಡೆಯಲೊಂದು ತೀರಾ , ತಡೆಯಲೊಂದು ತೀರಾ
ಕಡಲಿಗೊಂದು ತೀರಾ.
ಮನವಾ ಬಡಿಯಲೊಂದು ತೀರಾ, ಮೌನವ ಕದಡಲೊಂದು ತೀರಾ
ಕಡಲಿಗೊಂದು ತೀರಾ.. ಕಡಲಿಗೊಂದು ತೀರಾ..
ನೀಲಿ ಅಲೆಗಳ, ದೊಡ್ಡ ತೆರೆಗಳಾ
ತಡೆಯಲೊಂದು ತೀರಾ , ತಡೆಯಲೊಂದು ತೀರಾ , ತಡೆಯಲೊಂದು ತೀರಾ

ಅಲೆಗಳೇ ಹುಚ್ಚೇ, ನಾನೇ ಹೆಚ್ಚೇ
ಇನ್ನು ಸಾಕೇ ?? ಮತ್ತು ಬೇಕೇ??
ಮಿಥ್ಯಕೆ ಮಿಥ್ಯ , ಸಾವೇ ಸತ್ಯ
ಸತ್ಯಕೂ ಮಿಥ್ಯ , ಸತ್ಯದ ಸಾವೇ ಮಿಥ್ಯ
ಕತ್ತಲಲಿ ಬೆಳೆಯುತಿಹುದು ಮಿಥ್ಯ
ನಿಂತು ನೋಡುತಿರುವ ಸತ್ಯ , ಸಾವಲು ನಗುತಲಿರುವ ಸತ್ಯ

ಬಾವನೆ ಸಾಕು , ಬೆತ್ತಲೆ ಬೇಕು
ಅವಳು ಬೇಕು , ಆದುವು ಬೇಕು
ಎಲ್ಲವು ನಾನೇ , ಎಲ್ಲವೂ ನನದೆ
ಮನುಜನೆ ಇಲ್ಲವೇ ನಿನಗೆ ತೀರಾ ??
ತೀರದಾ ವ್ಯಾಮೊಹಗಳಿಗೆ ಬೇಲಿ ಎಂಬ ತೀರಾ
ಮನಸಿಗೆ ಸಾಕು ಎಂಬ ತೀರಾ ... ಸತ್ಯವೇ ಬೇಕು ಎಂಬ ತೀರಾ ..

ಕಡಲಿಗೊಂದು ತೀರಾ.. ಕಡಲಿಗೊಂದು ತೀರಾ..
ನೀಲಿ ಅಲೆಗಳ, ದೊಡ್ಡ ತೆರೆಗಳಾ
ತಡೆಯಲೊಂದು ತೀರಾ , ತಡೆಯಲೊಂದು ತೀರಾ , ತಡೆಯಲೊಂದು ತೀರಾ
ಕಡಲಿಗೊಂದು ತೀರಾ.
ಮನವಾ ಬಡಿಯಲೊಂದು ತೀರಾ, ಮೌನವ ಕದಡಲೊಂದು ತೀರಾ
ಕಡಲಿಗೊಂದು ತೀರಾ.. ಕಡಲಿಗೊಂದು ತೀರಾ..
ನೀಲಿ ಅಲೆಗಳ, ದೊಡ್ಡ ತೆರೆಗಳಾ
ತಡೆಯಲೊಂದು ತೀರಾ , ತಡೆಯಲೊಂದು ತೀರಾ , ತಡೆಯಲೊಂದು ತೀರಾ

Wednesday, June 12, 2013

ನೀನೆ ತಂಪು, ನಿನಗೇಕೆ ತಂಪು ??

ಮಳೆಯ ಹನಿಯೊಂದು ನೆಲ ಸೇರಿದೆ
ಮುಗಿಲ ಮರೆಯಿಂದ ನೆಲೆ ಜಾರಿದೆ.
ಕಣ್ಣಾ ಹನಿಯೊಂದು ಕೆನ್ನೆ ತಿಡಿದೆ
ಹ್ರದಯಕ್ಕು ನೋವು ತಿಳಿದಂತಿದೆ ..


ಆಹಾ, ಆಹಾ ! ಮತ್ತೇಕೆ? ಮತ್ತೇಕೆ??
ಅದುವೇ ಆಸೆ !!
ಮುಗಿಲೇ ಬೇಕೆನ್ನೋ ಮಳೆ ಹನಿಯ ಭಾಷೆ, ಜೊತೆಯಾಗಿ ನಿಲ್ಲೋಕೆ ರವಿಯೆಂಬ ಉಷೆ 
ಅವಳತ್ತ ಸಾಗೆನ್ನೋ ಮನಸಿನ ನಿಶೆ, ಪ್ರೀತಿಯ ನಶೆ ..


ನನ್ನಲ್ಲಿ ಸೇರೋಕೆ ಮನಸಾಗದೆ ? ಹೊಸ ಚಿಗುರಿಗೆ ಉಸಿರು ನಿನಾಗದೆ ..
ನೀನೆ ತಂಪು, ನಿನಗೇಕೆ ತಂಪು ??
ಬಾ ನನ್ನ ಸನ್ನಿದಿಗೆ ಶ್ವೇತಾಂಬರಿ , ಕಾಯುತ್ತ ನಿಂತಿಹಳು ಗೋಧಾವರಿ.
ಸಖಿಯು ನೀನೆ, ಸಂಗಾತವೂ ನೀನೆ
ಮುನ್ನುಡಿಯ ಸಾಲು ಬೇಕಾಗಿದೆ, ಪಲ್ಲವಿಯ ನಾ ಬರೆದು ಇತ್ತಾಗಿದೆ.  

 
ಉಸಿರೇ ಬದುಕು, ಬಾವಕ್ಕೇ ಬದುಕು ತೆರೆಮರೆಯ ಆಟಕ್ಕೆ ಸಮಯ ಎಲ್ಲಿದೆ ?
ಮುಗಿಲೆತ್ತರದ ಜೀವನ ಕೈ ಬಿಸಿದೆ .  
ರಸವೇ ಜನನ, ವಿರಸವೇ ಮರಣ, ಸಮರಸವೆ ಜೀವನ ತಿಳಿದಾಗಿದೆ
ಮಳೆಹನಿಯಲಿ ಬುವಿಯು ಮಿಂದಾಗಿದೆ , ಅವಳಿಗ ಬಳಿ ನಿಂದು ನಲಿದಾಗಿದೆ
 
ಮಳೆಯ ಹನಿಯೊಂದು ನೆಲ ಸೇರಿದೆ
ಹಸಿರಾ ಉಸಿರಿಗೆ ಜೀವ ನೀಡಿದೆ 
ಕಣ್ಣಾ ಹನಿಯೊಂದು ಕೆನ್ನೆ ತಿಡಿದೆ
ಆನಂದ ಭಾಷ್ಪಕ್ಕು ಹ್ರದಯ ಮಿಡಿದಿದೆ.
 

Sunday, May 26, 2013

ಅವಳು ಅಹಲ್ಯಾ....

ಶಾಶ್ವತವಾಗಿದೆ ಬೆಳಕಿನ ದಿಬ್ಬಣ
ಕತ್ತಲ ಇರುಳಿನ ನೆರಳೊಳಗೆ
ಕಂಡು ಕಾಣದೆ, ನಿಂತು ಕೇಳದೆ
ಓಡುತ ಸಾಗಿದೆ ಅವಳಾ ಮನಾ
ಅವನೆಡೆಗೆ , ಅವನೆದೆಗೆ.......

ನಿರಂತರ ಸತ್ಯಕೆ, ಸುಳ್ಳಿನ ಬಾವಕೆ
ಬಾವದ ಒಡನೆಯೇ ಬೇಗುದಿ ಮಿಡಿತಕೆ
ದೂರವೇ ನಿಂತನು, ವಲವಿನ ಗೆಳಯನು
ಅವಳ ಹ್ರದಯವೇ ಸಮುದ್ರಾ, ಮನಸೇ ಅಲೆಗಳ
ಚಿತ್ತ ಚಾಂಚಲ್ಯ .. ಅವಳು ಅಹಲ್ಯಾ....

ಅಚ್ಹ ಬಿಳುಪಿನ ಹಿಮಾಲಯ ಶ್ವೇತೆ
ಕೆತ್ತಿ ಕಡೆದ ಅವಳದೇ ಕಲ್ಪನೆ, ಅವಳೇ ಶಿಲ್ಪಿ
ತಿರದ ವ್ಯಾಮೋಹ, ತೆರೆದ ಬಾಗಿಲು
ಮುಚ್ಚಬಾರದಿತ್ತೆ ಕದಾ ? ಅವನು ಅತಂತ್ರ
ಬಯಸಿ ಸ್ವಾತಂತ್ರ್ಯ ...

ಮುಗಿದಿದೆ ಎಲ್ಲವು, ಬಂಧನ ಸಲಿಲವೂ
ತುಂಬಿ ನಿಂತಿತು ಕಣ್ಣಿನ ಕೊಳ, ಹೆಣ್ಣಿನ ಮನಾ
ತಿಳಿದಿದೆ ಅವನಿಗೂ ಕೊನೆಯ ಕ್ಷಣಕೆ
ಕೊಟ್ಟ ನೋವಿಗೂ, ಅವಳ ನಲಿವಿಗೂ
ಎಲ್ಲಿಯದು ಸಂಬಧ , ಪ್ರೀತಿಯೇ ರುಣಾನುಬಂಧ

ಸೇರಲು ಬಯಸಿತು ಅರಿವಿನ ನಿಮಿಷವೂ
ಮಡಿಲ ಸೆರೆಯಲಿ ಅವಳ ದೇಹವೂ
ತಣ್ಣನೆ ಸ್ಪರ್ಶವೂ, ಕಂಗಳಲಿ ದೂರ ದಿಗಂತ
ಅವನೀಗ ಸ್ವತಂತ್ರ ..
ದೇಹದ ಪರಿದಿಯೂ, ಮನಸಿನ ಸರದಿಯೂ ಕೇವಲ ನಿಮಿತ್ತ..

Saturday, April 20, 2013

ನೇಸರದ ಕತ್ತಲಲಿ ಜಾರಿ ಹೋದೆನು ನಾನು ...


ನೇಸರದ ಕತ್ತಲಲಿ ಜಾರಿ ಹೋದೆನು ನಾನು
ಎಲ್ಲಿಯೂ ನೆಲೆಯಿಲ್ಲದೆ, ನೆಲೆನಿಲ್ಲದೆ, ನೆಲವಿಲ್ಲದೆ ..
ಪರ್ವ ಸಾಕ್ಷಿಯ ಮುದ್ದು ಮನಸೊಂದು ಕಳೆದು ಹೋಯಿತು ದೂರ
ಬೆಲೆಯಿಲ್ಲದೆ, ಬೆಲೆ ಕಟ್ಟದೆ , ಬೆಲೆ ಬಾಳದೆ.....
ಭಯವೇತಕೆ ನಿನಗೆ, ಓಹ್ ಮುಗ್ದ ಮನಸೇ
ಕತ್ತಲಲು ಕೂಡ ಬದುಕುಂಟು ನಿನಗೆ ..
ಹಲವು ತಾರೆಗಳ ಆಶ್ರಯ ಸಾಕಾಗದೆ
ಸಾಂತ್ವನಕೆ, ಸಾಂಗತ್ಯಕೆ, ಸಲ್ಲಾಪಕೆ ....
ಮತ್ತದೇ ನೆನಪು, ಬೆಚ್ಚನೆಯ ಬೆಳಕಿನಬಿಳುಪು
ವಯ್ಯಾರಕೆ, ಸುಪ್ತ ವ್ಯಾಮೋಹಕೆ,ಮಧುರ ಆಲಿಂಗನಕೆ
ಕತ್ತಲೇತಕೆ ಅಸಹ್ಯ, ಕತ್ತಲೇತಕೆ ನಿರ್ಲಿಪ್ತ
ಕತ್ತಲೇತಕೆ ಶೂನ್ಯ, ಕಪ್ಪು ಕಪ್ಪು ಗಾಢ೦ಧ...
ಒಹ್ ಮುಗ್ದ ಮನಸೇ, ಕತ್ತಲೆ ಮತ್ತೆ ಮಾತನಾಡಿತು ಹಿತದಿ
ಕತ್ತಲೆ ಕಳಚುವುದು ನಿನ್ನ ಅಂತರಂಗ ..
ಯೋಚನೆಯ ಆಳಕ್ಕೂ ಸಾಗಿ ಬರುವುದು ನಿಜದಿ ..
ಬೆತ್ತಲೆ ಮಾಡಿ ತೋರುವುದು ನಿನ್ನೆ ನಿನಗೆ, ಇದೆ ನಿಜ
ಬದಲಾಯಿತು ಮಾತು , ಭಾವವಾಯಿತು ನೇಸರದ ಕತ್ತಲು
ಬದಲಾಯಿತು ಪದ್ಯದ ಮೊದಲ ಸಾಲು ...
ನೇಸರದ ಕತ್ತಲಲಿ ಜಾರಿ ಹೋದೆನು ನಾನು
ನೆಲೆ ಹುಡುಕುವ ಭಾವವಿಲ್ಲದೆ, ಬಾನಿಗೆ ಎಲ್ಲೇ ಹುಡುಕದೆ
ಪರ್ವ ಸಾಕ್ಷಿಯ ಮುದ್ದು ಮನಸೊಂದು ಕಳೆದು ಹೋಯಿತು ದೂರ
ಅಂತರಂಗವ ತೆರೆದು ಬೆಲೆ ಕೇಳದೆ, ನೆಲೆ ಎನ್ನದೆ ....

https://www.facebook.com/nillisnull

ಕಳೆದು ಹೋಗುವ ನೀನು ಹುಡುಕಾಡುವ ನಾನು


ಕಳೆದು ಹೋಗುವ ನೀನು ಹುಡುಕಾಡುವ ನಾನು
ಕನಸಲು ನಿನ್ನ ಮುಗ್ದ ನಗುವಿನ ಅಬ್ಯಂಜನ 
ಅದೇನೋ ಹಿತನರಳಿಕೆಯ ಕೋಲಾಹಲ