Saturday, April 20, 2013

ನೇಸರದ ಕತ್ತಲಲಿ ಜಾರಿ ಹೋದೆನು ನಾನು ...


ನೇಸರದ ಕತ್ತಲಲಿ ಜಾರಿ ಹೋದೆನು ನಾನು
ಎಲ್ಲಿಯೂ ನೆಲೆಯಿಲ್ಲದೆ, ನೆಲೆನಿಲ್ಲದೆ, ನೆಲವಿಲ್ಲದೆ ..
ಪರ್ವ ಸಾಕ್ಷಿಯ ಮುದ್ದು ಮನಸೊಂದು ಕಳೆದು ಹೋಯಿತು ದೂರ
ಬೆಲೆಯಿಲ್ಲದೆ, ಬೆಲೆ ಕಟ್ಟದೆ , ಬೆಲೆ ಬಾಳದೆ.....
ಭಯವೇತಕೆ ನಿನಗೆ, ಓಹ್ ಮುಗ್ದ ಮನಸೇ
ಕತ್ತಲಲು ಕೂಡ ಬದುಕುಂಟು ನಿನಗೆ ..
ಹಲವು ತಾರೆಗಳ ಆಶ್ರಯ ಸಾಕಾಗದೆ
ಸಾಂತ್ವನಕೆ, ಸಾಂಗತ್ಯಕೆ, ಸಲ್ಲಾಪಕೆ ....
ಮತ್ತದೇ ನೆನಪು, ಬೆಚ್ಚನೆಯ ಬೆಳಕಿನಬಿಳುಪು
ವಯ್ಯಾರಕೆ, ಸುಪ್ತ ವ್ಯಾಮೋಹಕೆ,ಮಧುರ ಆಲಿಂಗನಕೆ
ಕತ್ತಲೇತಕೆ ಅಸಹ್ಯ, ಕತ್ತಲೇತಕೆ ನಿರ್ಲಿಪ್ತ
ಕತ್ತಲೇತಕೆ ಶೂನ್ಯ, ಕಪ್ಪು ಕಪ್ಪು ಗಾಢ೦ಧ...
ಒಹ್ ಮುಗ್ದ ಮನಸೇ, ಕತ್ತಲೆ ಮತ್ತೆ ಮಾತನಾಡಿತು ಹಿತದಿ
ಕತ್ತಲೆ ಕಳಚುವುದು ನಿನ್ನ ಅಂತರಂಗ ..
ಯೋಚನೆಯ ಆಳಕ್ಕೂ ಸಾಗಿ ಬರುವುದು ನಿಜದಿ ..
ಬೆತ್ತಲೆ ಮಾಡಿ ತೋರುವುದು ನಿನ್ನೆ ನಿನಗೆ, ಇದೆ ನಿಜ
ಬದಲಾಯಿತು ಮಾತು , ಭಾವವಾಯಿತು ನೇಸರದ ಕತ್ತಲು
ಬದಲಾಯಿತು ಪದ್ಯದ ಮೊದಲ ಸಾಲು ...
ನೇಸರದ ಕತ್ತಲಲಿ ಜಾರಿ ಹೋದೆನು ನಾನು
ನೆಲೆ ಹುಡುಕುವ ಭಾವವಿಲ್ಲದೆ, ಬಾನಿಗೆ ಎಲ್ಲೇ ಹುಡುಕದೆ
ಪರ್ವ ಸಾಕ್ಷಿಯ ಮುದ್ದು ಮನಸೊಂದು ಕಳೆದು ಹೋಯಿತು ದೂರ
ಅಂತರಂಗವ ತೆರೆದು ಬೆಲೆ ಕೇಳದೆ, ನೆಲೆ ಎನ್ನದೆ ....

https://www.facebook.com/nillisnull

1 comment:

  1. ಮನಸ್ಸಿನ ಶರಧಿಯಲ್ಲಿ ಶರವೇಗದಲ್ಲಿ ಹುಟ್ಟುವ ಭಾವಗಳು ಬದಲಾಗುತ್ತವೆ, ಬದಲಾಯಿಸುತ್ತವೆ, ಬದಲಾಗಲೇಬೇಕಾಗುತ್ತದೆ.. ಮನಸ್ಸಿನ ಯೋಚನೆಯ ಮಜಲುಗಳು ಇಳಿದಂತೆ ಹತ್ತುತ್ತಿರುವ ಭಾವವುಂಟಾಗುತ್ತದೆ. ಸುಂದರ ಬರಹ

    ReplyDelete