Monday, July 22, 2013

ಕಣ್ಣಿರಾಗದ ದುಃಖದ ನಡುವಿನ ಸಂತೋಷ ( To be continued ............)

ಮನಸ್ಸು ಬಿರಿದಿಟ್ಟ ಹಲಸಿನ ಹಣ್ಣಿನಂತಾಗಿತ್ತು . ಅಲ್ಲಲ್ಲಿ ಕೊಳೆತು ನಾರುತ್ತಿತ್ತು . ಚಿಕ್ಕ ಚಿಕ್ಕ ಬಿಳಿ ಹುಳುಗಳು ಆ ಕಡೆ , ಇ ಕಡೆ ಹರಿಯುತ್ತಿರುವ ಬಾವನೆ. ಮನಸ್ಸಿನ ಹುಳಗಳು . ಜೇಡು ಹೊಡೆಯದ ಮನೆಯ ಗೋಡೆಯ ಮೇಲೆ ಕುಳಿತು ದೂಳಿನ ಜೊತೆ ಸಹವಾಸ ಮಾಡಿದ ಹಲ್ಲಿಯಂತೆ ಕಂಡು ಬಂದೆ ನನಗೆ ನಾನೆ. ವಾಕರಿಕೆ ಬಂತು . ಬೆಂಗಳೂರು .. ಬೆಂಗಳೂರಿನ ಹೊಲಸು ಹೇಸಿಗೆಯ ಸುಖದ ರಾತ್ರಿಗಳು . ಅಬ್ಬಾ !! ಮೈ ಒಳಗಿನ ಪ್ರತಿ ರೋಮಗಳು ನೀತಿ ಕಳೆದುಕೊಂಡು , ಸುಬದ್ರವಾದ ಅಬಧ್ರದ ಸ್ತಿತಿಯಲ್ಲಿ ಸಿಲುಕಿ ತಮ್ಮನ್ನು ತಾವೇ ಹಳಿದುಕೊಂಡು ಪಕ್ಕದ ರೋಮಕ್ಕೆ ತಿಳಿದುಹೋದರೆ ಎಂದು ಅಲುಗಾಡದೆ ಮಲಗಿ ಬಿಟ್ಟಿದ್ದವು ತಮ್ಮ ಮುಲುಗುವಿಕೆ ಮುಗಿಸಿ ..

ಅವಳು ಕೂಗುತ್ತಲೇ ಇದ್ದಳು . ಮುಲುಗುವಿಕೆ . ಹಾದರದ ಹೊಸ್ತಿಲಲ್ಲಿ . ಕನ್ನಡವೂ ಅಲ್ಲ. ಸ್ವಚ್ಛ ಕನ್ನಡ ಬರುವುದಿಲ್ಲವೆನೋ?? ಆಂಗ್ಲವೂ ಅಲ್ಲ . ನನಗೆ ತಿಳಿಯುವುದಿಲ್ಲ ಎಂಬ ಬಯವೇನೋ !!? ಕಂಗ್ಲಿಷ್ನಲ್ಲಿ ಸಹಕರಿಸುತ್ತಲೇ , ತನ್ನ ಬೆತ್ತಲಾದ ಎದೆಯ ಕಣಿವೆಯಲ್ಲಿ ನನ್ನ ಬೊಗಸೆ ಮುಖವನ್ನು ಮುಚ್ಚಿಟ್ಟು, ತಲೆಯಲ್ಲಿ ಕೈ ಆಡಿಸಿ , ಎದೆ ಕೂದಲನ್ನು ನೇವರಿಸಿ , ತುಟಿಗಳನ್ನು ಸಮರ್ಪಿಸಿ ಮತ್ತು ಮತ್ತು ಗಾಡವಾಗಿ ಆಲಂಗಿಸುತ್ತಿದ್ದರೆ, ದೇಹ
ಸಹಕರಿಸಲೇ ಬೇಕಾಗಿತ್ತು . ಸಹಕರಿಸುತ್ತಿತ್ತು . ಉದ್ವೆಗಗೊಳ್ಳುತ್ತಿದ್ದಳು, ಹತೋಟಿ ತಪ್ಪಿದ ವಾಹನದಂತೆ ಚಲಿಸುತ್ತಿದ್ದಳು . ಮೈ ಬೆವರು ಬೆವರು .. ಸುಗಂದವೋ? ದುರ್ನಾತವೋ !? ವಿಚಿತ್ರವಾದರೂ ಸತ್ಯ . ಇವಳ್ಯಾರು? ನಾನ್ಯಾರು ? ತಾಸುಗಳ ನಿಮಿಷಗಳ ಪರಿಚಯ ಸಾಕಾ?? ದೇಹಗಳು ಕಾದ ಕುಲುಮೆಗಳಾಗಿ, ಎಲ್ಲವನ್ನು ಕಳೆದುಕೊಂಡು , ಬಂಜರಾಗಿ , ಮುಡುಗಿಹೋದ ಐಶಾರಾಮಿ ಹಾಸಿಗೆಯ ಕಮರಿ ಹೋದ ಸ್ವಪ್ನಗಳಾಗಲು..? ಎಂಜಲು ಬಾಳೆ, ನೆಕ್ಕುತ್ತಿರುವ ನಾಯಿ . ಗಂಡನೆಲ್ಲೋ ಇವಳಿಗಾಗಿ ಮುಂಬರುವ ಮಕ್ಕಳಿಗಾಗಿ ಸತ್ತು ಸುಣ್ಣವಾಗುತ್ತಿರುವ ಕಪ್ಪು ರಾತ್ರಿಯಲ್ಲಿ , ಇನ್ಯಾರದೋ ಬಾಹು ಬಂದನದಲ್ಲಿ, ಮದುರ ಚುಂಬನದಲ್ಲಿ , ಸುಖದ ತುತ್ತ ತುದಿಯ ನಶೆಯಲ್ಲಿ , ಎಲ್ಲವನ್ನೂ ಕೊಟ್ಟು , ತನ್ನತನವ ಬಿಟ್ಟು ಕಾಮದ ಕೆನ್ನಾಲಿಗೆಯಲ್ಲಿ ಮಲಗೆದ್ದವಳ ಮೋಹಕತೆಗೆ ಸತ್ತು ಬಂದ ಗಂಡ ಎಂಬ ಗಂಡು ಪ್ರಾಣಿ, ನರಸತ್ತ , ನಿರರ್ಥಕ ಹರದಾರಿ ನಡೆದಂತೆ , ಹಗಲಿನ ಬಂಡ ಹಸಿವನ್ನು ತೀರಿಸಿಕೊಂಡು , ಆಕೆಯ ಕಡೆ ಲಕ್ಷ್ಯ ಕೊಡದೆ ಪಕ್ಕ ಸರಿದು ನಿದ್ರೆ ಹೋದ ಎಷ್ಟೋ ಕ್ಷಣಗಳ ನಂತರದ ಆಕೆಯ ಕಂಬನಿಯೇ ಈಗ ನನ್ನ ಮೇಲೆ ಬೆವರಾಗಿ ಹರಿಯುತ್ತಿದೆ ಎನ್ನಿಸಿತು.

ಯಾರ ಮೇಲಿನ ಸಿಟ್ಟೋ ? ದುಃಖವೋ ? ಆಂತರ್ಯದಲ್ಲಿ ಕಟ್ಟಿಟ್ಟುಕೊಂಡ ಬಾವನೆಗಳ ಜಲಾಶಯದ ಕಟ್ಟೆ ಒಡೆದಂತೆ .. ಹಲವಾರು ತಾಸು ಮಳೆಯ ನಂತರದ ಕುಮಾರದಾರೆಯಂತೆ .. ಮುನ್ನುಗ್ಗುತ್ತಲೇ ಇದ್ದಳು . ನನಗಿವೆಲ್ಲ ಹೊಸತು . ದೇಹವು ಪಳಗಿಲ್ಲ . ತಿಳಿದಂತಿತ್ತು ಆಕೆಗೂ . ಕಣ್ಣಲ್ಲಿ ಅದೇನೋ ಕಾಂತಿ . ಮೈಲಿ ಅದೇನೋ ಹೊಳಪು . ಗುರುವಾದಳು ಶಿಷ್ಯನಾದೆ . ಪಾತ್ರದ ಪರಿಚಯವಿಲ್ಲ . ಬೇರೆ ಪಾತ್ರಧಾರಿಗಳಿಲ್ಲ. ಹಾಸಿಗೆಯೆ ರಂಗ ಮಂಟಪ . ಕಾಮರಾಜಮಾರ್ಗ ನಾಟಕ . ಬಣ್ಣ , ವೇಷ ಬುಶಣಗಳ ಅವಶ್ಯಕತೆಯಿಲ್ಲ . ನಿರಾಬರಣವೆ ಸುಂದರ . ದೇವರು ಕಡೆದ ಕಲಾಕ್ರತಿ . ಸಣ್ಣನೆ ಸೊಂಟ , ಉದ್ರೆಕಕ್ಕೆ ಕನ್ನಡಿ ಹಿಡಿಯುವಂಥ ಸ್ವಜನ , ಸುಜಲ ಸುಕೋಮಲ ಕುಚದ್ವಯಗಳು. ನೀಳ ಮಟ್ಟಸ ಹೊಟ್ಟೆಯ ಇಳಿಜಾರು .

ನಾನೇನು ಸುಂದರನಲ್ಲ . ಕುರುಪಿಯಂತೆ ಕಾಣಲು ಇಲ್ಲ ಅವಳಿಗೆ . ಉಸಿರಾಟದ ವೇದಿಕೆಗೆ ಮುಲುಗುವಿಕೆಯ ಸಂಗೀತ, ನಾನು ಬರಿದಾಗಿ ಬಂಡತನದಿ ಅವಳ ಎದೆ ಕಚ್ಚಿ ಮಲಗುವವರೆಗೂ ಕೇಳುತ್ತಲೇ ಇತ್ತು . ರಾತ್ರಿ ಅದು ನಿಂತಿದ್ದು ನಾನು ಬಿರುಸಾಗುವವರೆಗೂ ಮಾತ್ರ. ಸೂರ್ಯನ ಬೆಳಕು ಕಾಣುತ್ತಲೇ ತರಾತುರಿಯಿಂದ ನನ್ನ ಎಬ್ಬಿಸಿ ಅರ್ಧ ತೆಗೆದ ಬಾಗಿಲಿನಿಂದಲೇ ನನ್ನ ಹೊರದಬ್ಬಿ " ಮತ್ತೆ ಸಿಗೋಣ " ಎನ್ನುತ್ತಾ ದಡಾರನೆ ಬಾಗಿಲು ಹಾಕಿಕೊಂಡಾಗ ಅದು ಕನಸಿನ ಮಾತು ಎಂದು ತಿಳಿದಿರುವಂತೆ ನನ್ನ ಮುಕದ ಮೇಲೊಂದು ವಿಷಾದವೋ, ವಿಪರ್ಯಾಸವೋ ತಿಳಿಯದ ನಗುವೊಂದು ಹಾಡು ಹೋಯಿತು . ಆಗಷ್ಟೇ ಹಾಲು ಹಾಕಲು ಬಂಡ ಹುಡುಗ ಇದು ತನಗೆ ಸಹಜ ಎಂಬಂತೆ ನನ್ನ ಮುಕ ನೋಡಿ ನಕ್ಕ. ತಲೆ ಬಗ್ಗಿಸಿ ನಡೆದೆ ಗೊತ್ತಿರದ ಅನಾಮಿಕ ಹಾದಿಯಲ್ಲಿ . ಕವಲು ದಾರಿಗಳು ನನ್ನ ನೋಡಿ ಬಾ ಎಂಬಂತೆ ಕೈ ಬಿಸಿದವು .

ಬೆಂಗಳೂರು ಬಂದಿಳಿದ ದಿನದಿಂದಲೂ ಊರು ಹಿಡಿಸಿದ್ದು ಅಷ್ಟಕ್ಕಷ್ಟೇ . ದೊಡ್ಡ ದೊಡ್ಡ ಕಟ್ಟಡಗಳು , ಐಶಾರಾಮಿ ಕಾರುಗಳು , ದುಡ್ಡಿನ ಹೊಳೆ ಹರಿಯದಿದ್ದವರ ಮೆಜೆಸ್ಟಿಕ್ ಬಸ್ ಸವಾರಿಗಳು , ಹುಚ್ಚು ಹಿಡಿಸುವ ಟ್ರಾಫಿಕ್ , ಬೇಡಿ ತಿನ್ನುವವರು , ಕೊಂದು ಬದುಕುವವರು . ಕಂಗಳ ಕಾಂತಿ ಕಳೆದುಕೊಂಡ ಮನುಷ್ಯರು . ಮನುಷ್ಯರಂತೆ ಕಾಣುವ ರೋಬ್ಹೊಗಳು. ಉಸಿರಾಡುವ ಆರ್ಟಿಫಿಷಿಯಲ್ ಇಂಟಲಿಜನ್ಸ ಸಾಫ್ಟ್ವೇರ್ಗಳು . ಮನುಷ್ಯನನ್ನೇ ಮರುಸ್ರಷ್ಠಿ ಮಾಡಬೇಕೆಂದು ಹೊರಟಿರುವ ದಿಗ್ಗಜರು . ಅವರಿಗೆ ಸೆಲ್ ಆಗಿ ಕುರಿಗಳಂತೆ ಬಸ್ನಲ್ಲಿ ಕುಳಿತು ಹೋಗುವ ಶ್ರೀಮಂತ ಕೂಲಿಗಳು . ಅವರನ್ನು ನೋಡಿ ಹೊಟ್ಟೆ ಕರುಳು ಕರಗಿ ಹೋಗುವಂತೆ ಕರುಬುವ ನನ್ನಂತ ಕೆಲಸವಿಲ್ಲದ , ಕೆಲಸವಿದ್ದು ಕೆಲಸ ಹುಡುಕುವ ದರಿದ್ರ ಜೀವನಗಳು ....

ನಗಬೇಕೆನ್ನಿಸಿತು ನಕ್ಕೆ ... ಆಂತರ್ಯ ?? ಬಿಕ್ಕಿ ಬಿಕ್ಕಿ ಅಳುತ್ತಿತ್ತು . ಎಲ್ಲಿದೆ ಸಂತೋಷ ? ಯಾವುದು ಸಂತೋಷ? ಯಾಕಾಗಿ ಇ ಜಂಜಾಟದ ಬದುಕುಗಳು ?? ದುಡ್ಡಿನ ಹಿಂದೆ ಓಡಿ ಹೆಣವಾಗುತ್ತಿರುವ, ಬದುಕಿದ್ದು ಶವಗಳಾಗಿರುವ ಬದುಕು ಬದುಕಾ?

ಎಷ್ಟು ಚಂದ ನನ್ನ ಹಳ್ಳಿ . ಎಷ್ಟು ಚಂದ ನಮ್ಮ ಜೀವನ . ದುಡ್ಡಿರುತ್ತೋ? ಬಿಡುತ್ತೋ ! ಖುಷಿ ? ಕಣ್ಣಿನಲ್ಲಿ ನೀರು ಚಿಮ್ಮಿದರೆ ಒರೆಸಲು ಸಂಭಂಧಗಳ ಹಸ್ತ ? ಇಲ್ಲೇನಿದೆ ? ಅಳಬೇಕಾ ? ಅತ್ತು ಸಾದಿಸುವುದೇನೂ ?? ೨೫ ವರ್ಷಗಳು ಓದಿದೆ . ವ್ಯರ್ಥ . ಇನ್ನೂ ಕೂಲಿತನ . ನಾನು ಒಬ್ಬ ಶ್ರೀಮಂತ ಕೂಲಿ . ಸ್ವಂತಿಕೆಯಿಲ್ಲದ ಪರಿಪೂರ್ಣ ಬಾಳು . ಮತ್ತೆ ಅಳಬೇಕೆನ್ನಿಸಿತು . ನಿಶ್ಯಬ್ದತೆ ತುಂಬಿದ ಒಂಟಿ ನಿಸರ್ಗ ಸಿಕ್ಕಿದ್ದರೆ , ಜಂಟಿಯಾಗಿ ಕಳೆದ ಗೆಳತಿಯ ತುಂಬು ಪ್ರೀತಿ ಕಂಡಿದ್ದರೆ , ಅಮ್ಮನ ಮಮತೆಯ ಮಡಿಲಿದ್ದರೆ ಅತ್ತು ಹಗುರಾಗುತ್ತಿದ್ದೆನೇನೋ ? ಇಲ್ಯಾವುದು ಇಲ್ಲ . ಅದ್ಯಾವುದು ಇಲ್ಲ ಎಂದು ಬಂದ ಹಲವೆ ಘಂಟೆಗಳಲ್ಲಿ ತಿಳಿದಿತ್ತು . ಅಥವಾ ನಾನು ಹಾಗೆ ತಿಲಿದುಕೊಂಡೆನೊ ?..

ಬಸ್ ಪಾಸ್ ಮಾಡಿಕೊಂಡ , ಮೆದುಳು ಸತ್ತ ಒಂಟಿ ಜೀವ ತಿರುಗದ ಗಲ್ಲಿಯಿಲ್ಲ . ಸಮಾಧಾನವಿಲ್ಲ . ಏನು ಮಾಡಬೇಕೆಂಬ ಕಚಿತ ಅಭಿಪ್ರಾಯವೂ ಇಲ್ಲ . ಸೋಲ್ಡ್ ಔಟ್ ಆಗಲು ಇಷ್ಟವಿಲ್ಲ . ಹಾಗಾಗದಿದ್ದರೆ ಇಲ್ಲಿ ಬದುಕಲು ಸಾದ್ಯವಿಲ್ಲ . ಅರ್ಥವಿಲ್ಲದ , ಅರ್ಥ ಹುಡುಕಿದರೂ ವ್ಯರ್ಥವಾಗುವ ಸಮಸ್ಯೆ ಅಲ್ಲದ ಸಮಸ್ಯಾತ್ಮಕ ಪ್ರಶ್ನೆಗಳು .ಹುಚ್ಚಾ?? ಮನಸ್ಸು ಒಪ್ಪಿಕೊಳ್ಳದು . ಅದರದೇ ಸ್ವಾರ್ಥ ಅದಕ್ಕೆ . ಗುರಿಯಿಲ್ಲದ ದಾರಿಗಳನ್ನು ಸವೆದೆ . ಏಕೆ ಹೀಗಾಗಿ ಹೋದೆ ? ಸಮಸ್ಯೆಗಳಿಲ್ಲದೆ ಇರುವುದೇ ನನ್ನ ಸಮಸ್ಯೆಯಾ? ಯೋಚಿಸುತ್ತಲೇ ಹೋದ ದಾರಿಯಲ್ಲೇ ಹಿಂತುರಿಗಿದೆ . ದಾರಿ ತಪ್ಪಿದರು ಯಾರನ್ನೂ ಕೇಳಲಿಲ್ಲ . ಎಲ್ಲಿಗೆ ಹೋಗಬೇಕೆಂಬ ನಿರ್ದಿಷ್ಟ ಜಾಗವೂ ಇರಲಿಲ್ಲ ಎನ್ನುವುದು ಸರಿಯೇ .

"ಸಮಸ್ಯೆಗಳಿಲ್ಲದ ಮನುಷ್ಯನಿಗೆ ಇಷ್ಟು ಸಮಸ್ಯೆಯಾ? ಅಣಕವಾಡಿತು ಅಂತರಂಗ . ಜಾಡಿಸಿ ಒದ್ದೆ . ಮತ್ತೆ ಮಾತಿಲ್ಲ .
ದೊಡ್ಡ ದೊಡ್ಡ ಮಹಡಿ ಕಟ್ಟಡಗಳು , ನಾನು ಕಟ್ಟಿಸುತ್ತೇನೆ . ಐಶಾರಾಮಿ ಕಾರುಗಳು ತೆಗೆದುಕೊಂಡರಾಯಿತು . ಯಾವುದು ಅಸಾದ್ಯವಿಲ್ಲ ನನಗೆ . ಅಹಂ ಬ್ರಮ್ಮಾಸ್ಮಿ ನಂಬುವವನು ನಾನು . ಹೋಟೆಲ್ ಮಾಡಿದರೆ ? ಕಂಪನಿ ತೆಗೆದರೆ ?? ಸಿನೆಮಾ ದುನಿಯಾ ಸೇರಿ ಬಿಟ್ಟರೆ ? ಕತೆ ಕವನಗಳನ್ನು ಬರೆದರಾಯಿತು . ಮನೆಗೆ ಹೋಗಿ ಬಿಟ್ಟರೆ ? ಅದೇ ಹಸಿರು , ಚಂದದ ಗಾಳಿ , ತಂಪನೆ ಮಳೆಗಾಲ , ಮನೆ , ಮನೆ ಬದಿಯ ಕೆರೆ , ಬಾಲ್ಯದ ಆಟಗಳು , ಪುಟಾಣಿ ಗೆಳೆಯರು , ಮುಸ್ಸಂಜೆಯ ಜಿರುಂಡೆಗಲು , ಅಮ್ಮನ ಕೈ ಊಟ, ಅಜ್ಜನ ವಾತ್ಸಲ್ಯ .

ಅಪ್ಪ ಮಾಡಿಟ್ಟ ಆಸ್ತಿಯಾ?? ಕುಟುಕಿತು ಅಂತರಂಗ.

ಹಾಗಲ್ಲ . ಜೀವನವಲ್ಲ ಇದು .ಯಾರು ಇಲ್ಲದ ದುಡ್ಡಿನ ಮೇಲೆ ವ್ಯಾಮೋಹದ , ಅರ್ಧ ಬೆಂದ ಅನ್ನ, ಹಲಸಿ ಹೋದ ನಿನ್ನೆ ರಾತ್ರಿಯ ಸಾಂಬಾರ್ ಜೀವನಾ? ದುಡ್ಡಿನ ಕಂತೆಗಳೇ ಜೀವನದ ಪರಿಪುರ್ಣತೆಯಾ?? ವಾರದ ಎಂಡ್ ಗಳಿಗೆ ಕಾದು ಕಾದೂ .. ನರಳಿತು . ವಿಷಾದದಲ್ಲಿ ಮನಸ್ಸು . ಬಹಳಷ್ಟು ಪ್ರಶ್ನೆಗಳು . ಉತ್ತರವಿದ್ದವಾ? ಯಾರ ಬಳಿ? ನನಗೆ ಸಮಾದಾನ ಕೊಡಬಹುದಾ ? ನಿಜವಾಗಿಯೂ ಹುಚ್ಚು ಹಿಡಿದಿತ್ತು . ಮಾನವೀಯತೆ ಮೇರೆ ಮೀರಿತ್ತು . ಕಣ್ಣು ಕಾಣದವರಿಗೆ ರಸ್ತೆ ದಾಟಿಸಿದೆ . ಏರಿನಲ್ಲಿ ನಿಂತ ತಳ್ಳುಗಾಡಿಯವನಿಗೆ ಸಹಕರಿಸಿದೆ . ಕಾರ್ ಅಡಿಗಾಗಿ ಸಾಯುತ್ತಿದ್ದ ನಾಯಿ ಮರಿಗೆ ನೀರು ಹಾಕಿದೆ . ಯಾವುದೊ ಕಟ್ಟೆಯ ಮೇಲೆ ಕುಳಿತು ಅರ್ದ ಕಪ್ ಟೀ ಕುಡಿದು , ಎರಡೆರಡು ಸಿಗರೇಟ್ ಸುಟ್ಟು ಪ್ರಪಂಚವೇ ಸಿಕ್ಕಿತು ಎಂಬ ಬಾವದಲ್ಲಿರುವ ಮುಡ ಜನರನ್ನು ನೋಡಿ ಅಳುತ್ತಾ, ನಗುತ್ತಾ ಕಳೆಯುತ್ತಿದ್ದ ದಿನಗಳಲ್ಲಿ ಸಿಕ್ಕಳವಳು . ಹಿಂದಿನ ದಿನವಷ್ಟೇ ಅನಾಮದೇಯ ಅನಾಮಿಕ ಹೆಣ್ಣಿನ ಕಾರ್ ಹತ್ತಿ ಗಂಡು ಸೂಳೆಯ ಪಾಡು ಪಟ್ಟಿದ್ದರು ಮತ್ತವಳ ಕಾರ್ ಏರಲು ಸಾಹಸ ಮಾಡಿದ್ದೆ . ನಾ ಹುಚ್ಚನಲ್ಲವೇ? ತೇಪೆ ಹಚ್ಚುತ್ತಿದ್ದೆ . ಬಿಟ್ಟಿ ಸುಕವಲ್ಲವೇ ? ಕುಗುತ್ತಲೇ ಇತ್ತು ಅಂತರಂಗ.

No comments:

Post a Comment