Wednesday, June 12, 2013

ನೀನೆ ತಂಪು, ನಿನಗೇಕೆ ತಂಪು ??

ಮಳೆಯ ಹನಿಯೊಂದು ನೆಲ ಸೇರಿದೆ
ಮುಗಿಲ ಮರೆಯಿಂದ ನೆಲೆ ಜಾರಿದೆ.
ಕಣ್ಣಾ ಹನಿಯೊಂದು ಕೆನ್ನೆ ತಿಡಿದೆ
ಹ್ರದಯಕ್ಕು ನೋವು ತಿಳಿದಂತಿದೆ ..


ಆಹಾ, ಆಹಾ ! ಮತ್ತೇಕೆ? ಮತ್ತೇಕೆ??
ಅದುವೇ ಆಸೆ !!
ಮುಗಿಲೇ ಬೇಕೆನ್ನೋ ಮಳೆ ಹನಿಯ ಭಾಷೆ, ಜೊತೆಯಾಗಿ ನಿಲ್ಲೋಕೆ ರವಿಯೆಂಬ ಉಷೆ 
ಅವಳತ್ತ ಸಾಗೆನ್ನೋ ಮನಸಿನ ನಿಶೆ, ಪ್ರೀತಿಯ ನಶೆ ..


ನನ್ನಲ್ಲಿ ಸೇರೋಕೆ ಮನಸಾಗದೆ ? ಹೊಸ ಚಿಗುರಿಗೆ ಉಸಿರು ನಿನಾಗದೆ ..
ನೀನೆ ತಂಪು, ನಿನಗೇಕೆ ತಂಪು ??
ಬಾ ನನ್ನ ಸನ್ನಿದಿಗೆ ಶ್ವೇತಾಂಬರಿ , ಕಾಯುತ್ತ ನಿಂತಿಹಳು ಗೋಧಾವರಿ.
ಸಖಿಯು ನೀನೆ, ಸಂಗಾತವೂ ನೀನೆ
ಮುನ್ನುಡಿಯ ಸಾಲು ಬೇಕಾಗಿದೆ, ಪಲ್ಲವಿಯ ನಾ ಬರೆದು ಇತ್ತಾಗಿದೆ.  

 
ಉಸಿರೇ ಬದುಕು, ಬಾವಕ್ಕೇ ಬದುಕು ತೆರೆಮರೆಯ ಆಟಕ್ಕೆ ಸಮಯ ಎಲ್ಲಿದೆ ?
ಮುಗಿಲೆತ್ತರದ ಜೀವನ ಕೈ ಬಿಸಿದೆ .  
ರಸವೇ ಜನನ, ವಿರಸವೇ ಮರಣ, ಸಮರಸವೆ ಜೀವನ ತಿಳಿದಾಗಿದೆ
ಮಳೆಹನಿಯಲಿ ಬುವಿಯು ಮಿಂದಾಗಿದೆ , ಅವಳಿಗ ಬಳಿ ನಿಂದು ನಲಿದಾಗಿದೆ
 
ಮಳೆಯ ಹನಿಯೊಂದು ನೆಲ ಸೇರಿದೆ
ಹಸಿರಾ ಉಸಿರಿಗೆ ಜೀವ ನೀಡಿದೆ 
ಕಣ್ಣಾ ಹನಿಯೊಂದು ಕೆನ್ನೆ ತಿಡಿದೆ
ಆನಂದ ಭಾಷ್ಪಕ್ಕು ಹ್ರದಯ ಮಿಡಿದಿದೆ.
 

6 comments:

  1. ಹೋಲಿಕೆ ಚೆನ್ನಾಗಿ ಒಡಮೂಡಿದೆ. ಸಾಲು ಸಾಲುಗಳಲ್ಲೂ ಭಾವ ತೀವ್ರತೆ ಮನಸೆಳೆಯುತ್ತದೆ.

    http://badari-poems.blogspot.in

    ReplyDelete